ವಚನಗಳು,ವಚನಕಾರರು ಹಾಗೂ ಅವರ ಅಂಕಿತನಾಮಗಳು


  •  ಬಸವಣ್ಣನವರ ವಚನಗಳು


     ಮಾನವ ಜನ್ಮ ದೊಡ್ಡದಲ್ಲಾ...!
     ಮಾನವೀಯತೆ ದೊಡ್ಡದು ...
     ಧರ್ಮ ದೊಡ್ಡದಲ್ಲಾ.....! 
     ದಯೆ ದೊಡ್ಡದು....

    ಆಸೆ, ಆಮಿಷ, ತಾಮಸ, ಹುಸಿ, ವಿಷಯ,
    ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ-
    ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ.
    ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು.
    ಇದು ಕಾರಣ, ಇವೆಲ್ಲವ ಕಳೆದು
    ಎನ್ನ ಪಂಚೈವರ, ಭಕ್ತರ ಮಾಡು 
    ಕೂಡಲಸಂಗಮದೇವಾ.

    ಹುತ್ತಮ ಬಡಿದರೆ ಉರಗ ಸಾವುದೆ?
    ಘೋರತಪವ ಮಾಡಿದರೆನು
    ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು    
    ನಂಬುವನಯ್ಶಾ   ಕೂಡಲಸಂಗಮದೇವ?

    ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
    ನೀಡಿ ಕೆಟ್ಟರು ನಿಜವಿಲ್ಲದೆ,
     ಮಾಡುವ ನೀಡುವ ನಿಜಗುಣವುಳ್ಳಡೆ 
    ಕೂಡಿಕೊಂಬ ನಮ್ಮ ಕೂಡಲಸಂಗಮದೇವ

    ಮಡಿಕೆಯ ಮಾಡುವಡೆ ಮ ಮೊದಲು,
     ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,
     ಶಿವಪಥವನರಿವಡೆ ಗುರುಪಾದವೇ ಮೊದಲು,
     ಕೂಡಲಸಂಗಮದೇವನರಿವಡೆ ಶರಣರ
     ಸಂಗವೇ ಮೊದಲು.

    ನೀರ ಕಂಡಲ್ಲಿ ಮುಳುಗುವರಯ್ಯಾ
    ಮರವ ಕಂಡಲ್ಲಿ ಸುತ್ತುವರಯ್ಯಾ 
    ಭತ್ತುವ ಚೆಲುವ ಒಣಗುವ ಮರವ 
    ಮೆಚ್ಚಿದವರು ನಿಮ್ಮ ನೆತ್ತ ಬಲ್ಲರಯ್ಯಾ 
    ಕೂಡಲಸಂಗಮದೇವ

    ಲೋಕದ ಡೊಂಕ ನೀವೇಕೆ ತಿದ್ದುವಿರಿ 
    ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ 
    ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ 
    ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ 
    ನಮ್ಮ ಕೂಡಲಸಂಗಮದೇವ

    ಅಂಗದ ನಮಾಫಟವು ಸಿಂಗದ ಗಾತ್ರವು,
    ಹಿಂಗದು ಮನದಲ್ಲಿ ನಾನಾ ವಿಕಾರವು.
    ಬಂದೆಹೆನೆಂದರಿಯಲಿಲ್ಲಾಗಿ, ಸಂದೇಹ ಬಿಡದಾಗಿ,
    ಮುಂದುಗಾಣದು ಲೋಕ,
    ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ,
    ಕೂಡಲಸಂಗಮದೇವಾ.
     
    ವಿಕಳನಾದೆನು ಪಂಚೇಂದ್ರಿಯ ಸಪ್ತಧಾತುವಿನಿಂದ,
    ಮತಿಗೆಟ್ಟೆನು ಮನದ ವಿಕಾರದಿಂದ,
    ಧೃತಿಗೆಟ್ಟೆನು ಕಾಯವಿಕಾರದಿಂದ,
    ಧೃತಿಗೆಟ್ಟೆನು ಕಾಯವಿಕಾರದಿಂದ,
    ಶರಣುವೊಕ್ಕೆನು ಕೂಡಲಸಂಗಮದೇವ
     
    ಮುನಿದೆಯಾದಡೆ ಒಮ್ಮೆ ಜರೆದಡೆ ಸಾಲದೆ
    ಅಕಟಕಟಾ, ಮದನಂಗೆ ಮಾರುಗೊಡುವರೆ
    ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ
    ಕೂಡಲಸಂಗಮದೇವಾ.
     
    ಆನು ಒಬ್ಬನು, ಸುಡುವರೈವರು,
    ಮೇಲೆ ಕಿಚ್ಚು ಘನ, ನಿಲಲುಬಾರದು.
    ಕಾಡ ಬಸವನ ಹುಲಿ ಕೊಂಡೊಯ್ದಡೆ
    ಆರೈಯಲಾಗದೆ ಕೂಡಲಸಂಗಮದೇವಾ.
     

    ಬಂದ ಯೋನಿಯನರಿದು ಸಲಹೆನ್ನ ತಂದೆ.
    ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು,
    ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು,
    ಎನ್ನ ತಂದೆ ಕೂಡಲಸಂಗಮದೇವಾ, 
    ಮಾಣಿಸು ನಿಮ್ಮ ಧರ್ಮ.
     

    ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
    ತಿಳಿಯಲೀಯದು, ಎಚ್ಚರಲೀಯದು.
    ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ
    ಸುಳಿದೆಗೆದು ಬೆಳೆವೆನು 
    ಕೂಡಲಸಂಗಮದೇವಾ.
     

    ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ.
    ಪಶುವೇನ ಬಲ್ಲುದು ಹಸುರೆಂದೆಠಸುವುದು.
    ವಿಷಯರಹಿತನ ಮಾಡಿ, ಭಕ್ತಿರಸವ ದಣಿಯೆ ಮೇಯಿಸಿ,
    ಸುಬುದ್ಧಿಯೆಂಬ ಉದಕವನೆರೆದು,
    ನೋಡಿ ಸಲಹಯ್ಯಾ, 
    ಕೂಡಲಸಂಗಮದೇವಾ.
     









  • ಪ್ರಮುಖ ವಚನಕಾರರು ಹಾಗೂ ಅವರ ಅಂಕಿತನಾಮಗಳು


       ವಚನಕಾರರು              ಅಂಕಿತನಾಮಗಳು
  • ಅಕ್ಕಮಹಾದೇವಿ   -      ಚನ್ನಮಲ್ಲಿಕಾರ್ಜುನ
  • ಬಸವಣ್ಣ              -      ಕೂಡಲಸಂಗಮದೇವ 
  • ಮುಕ್ತಾಯಕ್ಕ          -    ಅಜಗಣ್ಣ 
  • ಅಂಬಿಗರ ಚೌಡಯ್ಯ -   ಅಂಬಿಗರ ಚೌಡಯ್ಯ
  • ಮಡಿವಾಳ ಮಾಚಯ್ಯ - ಕಲಿದೇವರದೇವ
  • ಗಂಗಾಂಬಿಕೆ.     -          ಗಂಗಾಪ್ರಿಯ.                                                                ಕೂಡಲಸಂಗಮದೇವ      
  • ನೀಲಾಂಬಿಕೆ      -          ಸಂಗಯ್ಯ 
  • ಆದಯ್ಯ       -             ಸೌರಾಷ್ಟ್ರ ಸೋಮೇಶ್ವರ 
  • ಜೇಡರ ದಾಸಿಮಯ್ಯ -  ರಾಮನಾಥ
  • ಅಲ್ಲಂಪ್ರಭು       -         ಗುಹೇಶ್ವರ 
  • ನೀಲಮ್ಮ           -         ಬಸವ
  • ಮೋಳಿಗೆ ಮಾರಯ್ಯ  - ನಿ:ಕಳಂಕ ಮಲ್ಲಿಕಾರ್ಜುನ 
  • ಸೋಮೇಶ್ವರ    -         ಪ್ರಭುವೇ ಕೇತಲದೇವಿ
  • ಕುಂಭೇಶ್ವರ.     -          ನಿರ್ಮಿತಿ ನಿಜಲಿಂಗದಲ್ಲಿ
  • ಲಕ್ಷ್ಮಮ್ಮ.         -         ಅಗಜ್ಜೇಶ್ವರಲಿಂಗವು 
  • ಲಿಂಗಮ್ಮ          -       ಅಪ್ಪನ ಪ್ರಿಯ ಚೆನ್ನಬಸವಣ್ಣ
  • ನಿಜಗುಣ ಶಿವಯೋಗಿ      -      ಶಂಭುಲಿಂಗ 
  • ಶ್ರೀ ಜಯರಾಜ್ ಚಾಮರಾಜೇಂದ್ರ.   -  ಶ್ರೀ ವಿದ್ಯಾ
  • ವರದ ಸಂಗಣ್ಣ         - ವರದ ಶಂಕೇಶ್ವರ 
  • ಶಂಕರ ದಾಸಿಮಯ್ಯ  - ನಿಜಗುರು ಶಂಕರ ದೇವ
  •  ಶಿವನಾಗಮಯ್ಯ    -   ನಾಗಪ್ರಿಯ ಚೆನ್ನ                                                  ರಾಮೇಶ್ವರ 
  • ಅಕ್ಕ ನಾಗಮ್ಮ       -    ಬಸವಣ್ಣ ಪ್ರಿಯ ಚೆನ್ನ 
  • ವ್ಯಾಸರಾಯ       -      ಶ್ರೀ ಕೃಷ್ಣ 
  • ಷಣ್ಮುಖ ಸ್ವಾಮಿ.    -   ಅಖಂಡೇಶ್ವರ
  • ಅಕ್ಕಮ್ಮ.             -     ರಾಮೇಶ್ವರ ಲಿಂಗ
  • ಹೆಂಡದ ಮಾರಯ್ಯ -   ಧರ್ಮೇಶ್ವರಾಲಿಂಗ
More Content

✍️✍️✍️✍️✍️✍️👇👇👇



0 Comments