ಮಹಾತ್ಮ ಗಾಂಧಿಜಿಯವರ
154ನೇ ಜಯಂತಿ
ವೇದಿಕೆ ಮೇಲೆ ಕುಳಿತಿರುವ ಕಾರ್ಯಕ್ರಮದ ಅಧ್ಯಕ್ಷರು, ಪೂಜ್ಯ ಗುರುಗಳು ,ಮುಖ್ಯ ಅತಿಥಿಯರು ಹಾಗೂ ನನ್ನ ಸಹಪಾಠಿಗಳೇ, ತಮ್ಮೆಲ್ಲರಿಗೂ ಮುಂಜಾನೆಯ ಶುಭಾಶಯಗಳನ್ನು ನೀಡುತ್ತ ನನ್ನ ಭಾಷಣವನ್ನು ಪ್ರಾರಂಭ ಮಾಡುತ್ತೇನೆ.
ಇವತ್ತು ನಾವು ಮಹಾತ್ಮ ಗಾಂಧೀಜಿಯವರ 154 ನೇ ಜಯಂತಿಯವನ್ನು ಆಚರಿಸುತ್ತಿದ್ದೇವೆ. ಮಹಾತ್ಮ ಗಾಂಧೀಜಿಯವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ಹಾಗೂ ಧೀಮಂತ ನಾಯಕನಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇದೆ. ಅದೇ ರೀತಿ ಭಾರತೀಯ ಜನರು ಅವರನ್ನು ಬಾಪೂಜಿ ಎಂದು ಕರೆಯುತ್ತಿದ್ದರು.
ಮಹಾತ್ಮ ಗಾಂಧೀಜಿಯವರು ಪೂರ್ಣ ಹೆಸರು ಮೋಹನದಾಸ ಕರಮಚಂದ ಗಾಂಧಿ. ಅವರು ಅಕ್ಟೋಬರ್ 2, 1969 ರಂದು ಗುಜರಾತ್ ರಾಜ್ಯದಲ್ಲಿನ ಕರಾವಳಿ ಪ್ರದೇಶದ ಪೋರಬಂದರ ಎಂಬ ನಗರದಲ್ಲಿ ಜನಿಸಿದರು. ಅವರ ತಂದೆ ಕರಮಚಂದ ಗಾಂಧಿ ಮತ್ತು ತಾಯಿ ಪುತಲಿಬಾಯಿ. ಅವರು ತಮ್ಮ 13ನೇ ವರ್ಷದಲ್ಲಿ ಕಸ್ತೂರಿಬಾಯಿ ಅವರನ್ನು ಮದುವೆಯಾದರೂ. ಗಾಂಧೀಜಿಯವರಿಗೆ ಮಹಾತ್ಮ ( ಮಹಾನ್ ಆತ್ಮ) ಎಂಬ ಗೌರವವನ್ನು ಮೊದಲು ರವೀಂದ್ರನಾಥ್ ಟಾಗೋರವರು ನೀಡಿದರು. ಅದೇ ರೀತಿ ಅವರಿಗೆ ಸುಭಾಷ್ ಚಂದ್ರ ಬೋಸ್ ಅವರು ರಾಷ್ಟ್ರಪಿತ ಎಂದು ಕರೆದರು. ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ವಿಶ್ವಾದ್ಯಂತ ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವನದಲ್ಲಿ ನಾಗರಿಕರ ಹಕ್ಕುಗಳಿಗಾಗಿ ಹೋರಾಡಿದರು. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ನಡೆಸಿದರು. ಭಾರತಕ್ಕೆ ಮರಳಿ ಬಂದ ನಂತರ ಬ್ರಿಟಿಷರ ವಿರೋಧ ಅಸಹಕಾರ ಆಂದೋಲನ, ಸ್ವದೇಶಿ ಆಂದೋಲನ, ಉಪ್ಪಿನ ಸತ್ಯಾಗ್ರಹ , ಕ್ವಿಟ್ ಇಂಡಿಯಾ ಆಂದೋಲನ ಎಂಬ ಆಂದೋಲನಗಳನ್ನು ನಡೆಸಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.ಅದೇ ರೀತಿ ಭಾರತದ ವಿಭಜನದಲ್ಲಿ ಮುಖ್ಯ ಪಾತ್ರ ವಹಿಸಿದರು. ಗಾಂಧೀಜಿಯವರು 30 ಜನವರಿ 1948 ರಂದು ನಿಧನ ಹೊಂದಿದರು.
ಕೊನೆಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸರ್ವೋತ್ಕೃಷ್ಟ ಹೋರಾಟಗಾರರಾದ, ಮಹಾ ತತ್ವಜ್ಞಾನಿ,
ಮತ್ತು ಅಪಾರ ರಾಷ್ಟ್ರೀಯತೆ ಹೊಂದಿರುವ ಧೀಮಂತ ನಾಯಕ ಮಹಾತ್ಮ ಗಾಂಧಿಜಿಯವರಿಗೆ ನಮನಗಳನ್ನು ಸಲ್ಲಿಸಿ ನನ್ನ ಚಿಕ್ಕ ಭಾಷಣಕ್ಕೆ ಚೊಕ್ಕ ವಿರಾಮ ನೀಡುತ್ತೇನೆ.
ಜೈ ಹಿಂದ್ ಜೈ ಭಾರತ
0 Comments