ದಸರಾ ಉತ್ಸವ

 ದಸರಾ ಉತ್ಸವ





ದಸರಾ ಹಬ್ಬವು ನಮ್ಮ ಭಾರತ ದೇಶದಲ್ಲಿ ಆಚರಿಸಲ್ಪಡುವ ಒಂದು ಮಹತ್ವದ ಹಬ್ಬವಾಗಿದೆ. ಈ ಹಬ್ಬವನ್ನು ವಿಜಯದಶಮಿ ಎಂದೂ ಕರೆಯುತ್ತಾರೆ.ಈ ಹಬ್ಬವು 'ಕೆಟ್ಟದ್ದರ ಮೇಲೆ ಒಳ್ಳೆಯದ' ವಿಜಯವನ್ನು ಸೂಚಿಸುತ್ತದೆ. ಇದು ಒಂಬತ್ತು ರಾತ್ರಿಗಳ ಹಬ್ಬವಾಗಿದ್ದು, ಇದರಲ್ಲಿ ದುರ್ಗಾ ದೇವಿಯ ಒಂಬತ್ತು ವಿವಿಧ ರೂಪಗಳನ್ನು ಸೃಷ್ಟಿಸಿ . ನವರಾತ್ರಿ ಉತ್ಸವವು ಅತಿ ವಿಜೃಭನೆಯಿಂದ ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಈ ಹಬ್ಬವು ಪ್ರಭು ಶ್ರೀ ರಾಮರವರು ರಾಕ್ಷಸ ರಾಜ ರಾವಣನು ಸೋಲಿಸಿದ ದಿನದ ನೆನಪಿನಗೋಸ್ಕರ ಆಚರಿಸಲಾಗುತ್ತದೆ. ಈ ದಸರಾ ಹಬ್ಬವು ಹಿಂದೂ ಚಂದ್ರನ ತಿಂಗಳ ಅಶ್ವಿನ್‌ನ ಹತ್ತನೇ ದಿನದಂದು ದಸರಾ ಹಬ್ಬವನ್ನು ಆಚರಿಸಲಾಗುತ್ತದೆ, ಇದು ಸಾಮಾನ್ಯವಾಗಿ ಆಕ್ಟೋಬರ್‌ ತಿಂಗಳಿನಲ್ಲಿ ಬರುತ್ತದೆ.



ದಸರಾ ಹಬ್ಬದ ಗೌರವಶಾಲಿ ಇತಿಹಾಸ




ರಾಮಾಯಣದಲ್ಲಿನ ಪ್ರಭು ಶ್ರೀರಾಮ ಹಾಗೂ ರಾಕ್ಷಸ ರಾಜ ರಾವಣನ ಪುರಾಣಕಥೆ. 


ಈ ದಸರಾ ಹಬ್ಬವು ನುರಾರೂ ವರ್ಷಗಳ ಪ್ರಾಚೀನ ಇತಿಹಾಸ ಹಾಗೂ ವಿವಿಧ ಪೌರಾಣಿಕ ಕಥೆಗಳೊಂದಿಗೆ ಸಂಬಂಧ ಹೊಂದಿದೆ. ನಮ್ಮ ಭಾರತ ದೇಶದ ಚರಿತ್ರೆಯಲ್ಲಿ ರಾಮಾಯಣ ಮತ್ತು ಮಹಾಭಾರತವೂ ಮಹಾಕಾವ್ಯಗಳನ್ನಾಗಿ ವಿಶೇಷ ಸ್ಥಾನಮಾನ ಪಡೆದಿವೆ. ಇದರಲ್ಲಿ ರಾಮಾಯಣದ ಪ್ರಕಾರ, ಭಗವಾನ ರಾಮರವರು ತನ್ನ ಹೆಂಡತಿ ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ವನವಾಸಕ್ಕೆ ಹೋದಾಗ,ರಾಕ್ಷಸ ರಾಜ ರಾವಣ ಶ್ರೀ ರಾಮರ ಅರ್ಧಾಂಗಿನಿಯಾದ ಸೀತೆಯನ್ನು ಹರಣ ಮಾಡಿದನು.ಆದನಂತರ ಶ್ರೀ ರಾಮರವರು ತಮ್ಮ ಸಹೋದರ ಲಕ್ಷ್ಮಣ ಹಾಗೂ ಗೆಳೆಯರಾದ ಹನುಮನ,ಸುಗ್ರೀವ, ಮತ್ತು ಅವರ ಕಪಿ ಸೈನ್ಯದ ಜೊತೆಗೂಡಿ ರಾಕ್ಷಸ ರಾಜ ರಾವಣನ ವಿರುದ್ಧ ಸೀತೆಯನ್ನು ರಕ್ಷಿಸಲು ಹೋರಾಡಿದನು. ಈ ಯುದ್ಧವು ಹತ್ತು ದಿನಗಳ ಕಾಲ ನಡೆಯಿತು.ಇದರಲ್ಲಿ ಶ್ರೀ ರಾಮನು ರಾಕ್ಷಸ ರಾಜ ರಾವಣನನ್ನು ಹತ್ತನೇ ದಿನದಲ್ಲಿ ಸೋಲಿಸಿದನು. 

ಶ್ರೀ ಭಗವಾನ್ ರಾಮನ ವಿಜಯವು ದುಷ್ಟ ಶಕ್ತಿಗಳ ಮೇಲೆ ಸದಾಚಾರದ ವಿಜಯವನ್ನು ಸಂಕೇತಿಸುತ್ತದೆ. ಶ್ರೀ ರಾಮರವರು ಜಯಶಾಲಿಯಾದ , ಯುದ್ಧದ ಈ ಹತ್ತನೇ ದಿನವು 'ದಸರಾ' ಹಬ್ಬನ್ನಾಗಿ ಆಚರಿಸಲಾಗುತ್ತದೆ.






ದೇವಿ ಚಾಮುಂಡೇಶ್ವರಿ (ದುರ್ಗಾ) ಮತ್ತು ರಾಕ್ಷಸ ಮಹಿಷಾಸುರನ ಪುರಾಣಕಥೆ.


ಈ ಪೌರಾಣಿಕ ಕಥೆಯು ರಾಕ್ಷಸ ಮಹಿಷಾಸುರನ ವಿರುದ್ಧ ದೇವಿ ಚಾಮುಂಡೇಶ್ವರಿ (ದುರ್ಗಾ) ದೇವಿಯ ಯುದ್ಧದ ಕಥೆಯಾಗಿದೆ. ಸದ್ಯದ ಮೈಸೂರು ನಗರಿನ ಮೇಲೆ ಮಹಿಷಾಸುರ ಎಂಬ ಹೆಸರಿನ ರಾಕ್ಷಸನ ಆಳ್ವಿಕೆವಿತ್ತು. ಈ ನಗರವು ಅವನ ದುಷ್ಟ ಶಕ್ತಿಯಿಂದ ವಶನಾಗಿತ್ತು. ಆ ರಾಕ್ಷಸನ ದುಷ್ಟ ಶಕ್ತಿಗಳಿಂದ ಈ ನಗರವನ್ನು ಮುಕ್ತಗೊಳಿಸಲು, ದುರ್ಗಾ ದೇವಿಯು ಒಂಬತ್ತು ರಾತ್ರಿಗಳ ಕಾಲ ಮಹಿಷಾಸುರನೊಂದಿಗೆ ಹೋರಾಡಿದಳು ಮತ್ತು ಅಂತಿಮವಾಗಿ ಹತ್ತನೇ ದಿನದಂದು ಮಹಿಷಾಸುರನನ್ನು ಕೊಂದಿ ಜಯಶಾಲಿಯಾದಳು. ಮತ್ತು ಈ ನಗರದ ಮೇಲೆವಿರುವ ದುಷ್ಟ ಹಾಗೂ ಕತ್ತಲೆಯ ಶಾಸನವನ್ನು ನಷ್ಟಪಡಿಸಿದಳು. ಅದಕ್ಕೆ ಈ ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಗಳಿಸಿದ ಸಂದರ್ಭಕ್ಕಾಗಿ ಈ ಹಬ್ಬವನ್ನು 'ವಿಜಯದಶಮಿ' ಎಂದು ಆಚರಿಸಲಾಗುತ್ತದೆ. ಮಹಿಷಾಸುರ ರಾಕ್ಷಸನಾಗಿದ್ದು, ಈ ರಾಕ್ಷಸನ ಹೆಸರ ಮೇಲಿಂದ ಈ ನಗರಕ್ಕೆ ಮೈಸೂರು ಎಂದು ಹೆಸರು ಬಂದಿತು. ಎಂಬ ದಂತಕಥೆವಿದೆ.





ಕರ್ನಾಟಕದಲ್ಲಿ ದಸರಾ ಉತ್ಸವ.




15 ನೇ ಶತಮಾನದಲ್ಲೇ ವಿಜಯನಗರ ಅರಸರ ಕಾಲದಲ್ಲಿ ದಸರಾ ಹಬ್ಬಗಳು ಆರಂಭವಾದವು. ಈ ಉತ್ಸವವು 14 ನೇ ಶತಮಾನದ ವಿಜಯನಗರ ಸಾಮ್ರಾಜ್ಯದಲ್ಲಿ ಐತಿಹಾಸಿಕ ಪಾತ್ರವನ್ನು ವಹಿಸಿದೆ, ಅಲ್ಲಿ ಇದನ್ನು ಮಹಾನವಮಿ ಎಂದು ಕರೆಯಲಾಗುತ್ತಿತ್ತು ಮತ್ತು ಹಂಪಿಯ ಹಜಾರ ರಾಮ ದೇವಾಲಯದ ಹೊರಗೋಡೆಯ ಪರಿಹಾರ ಕಲಾಕೃತಿಯಲ್ಲಿ ಉತ್ಸವಗಳನ್ನು ತೋರಿಸಲಾಗಿದೆ.ಈ ಪ್ರಾಚೀನ ಪುರಾವೆಗಳು ದಸರಾ ಈ ಹಬ್ಬವು ಕರ್ನಾಟಕ ರಾಜ್ಯದಲ್ಲಿ 15 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜರಿಂದ ಆಚರಿಸಲ್ಪಟ್ಟವು ಎಂದು ಸೂಚಿಸುತ್ತದೆ.ವಿಜಯನಗರ ಸಾಮ್ರಾಜ್ಯವು ದಖ್ಖನ್ ಸುಲ್ತಾನರ ಆಳ್ವಿಕೆಯಲ್ಲಿ ಪತನವಾದ ನಂತರ, ಅವರ ಆಡಳಿತಗಾರರ ಅಡಿಯಲ್ಲಿ ಈ ಹಿಂದೂ ಹಬ್ಬಗಳು ಹಾಗೂ ಆಚರಣೆಗಳು ಕೊನೆಗೊಂಡವು. ತದನಂತರ ಮೈಸೂರಿನ ಒಡೆಯರ್‌ಗಳು ವಿಜಯನಗರ ಸಾಮ್ರಾಜ್ಯದ ದಕ್ಷಿಣ ಭಾಗಗಳಲ್ಲಿ ರಾಜ್ಯವನ್ನು ರಚಿಸಿ, ಮಹಾನವಮಿ (ದಸರಾ) ಉತ್ಸವವನ್ನು ಮುಂದುವರೆಸಿದರು, ಈ ಸಂಪ್ರದಾಯವನ್ನು ರಾಜ ಒಡೆಯರ್ ಅವರು 1610 ರ ಸಪ್ಟೆಂಬರ್ ತಿಂಗಳಿನಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭಿಸಿದರು.ಮೈಸೂರು ನಗರವು ದಸರಾ ಹಬ್ಬವನ್ನು ವೈಭವ ಮತ್ತು ವಿಜೃಂಭಣೆಯಿಂದ ಆಚರಿಸುವ ಸಂಪ್ರದಾಯವನ್ನು ಹೊಂದಿದೆ. ಆದರೆ 

ಧಾರ್ಮಿಕವಾಗಿ ರಾಜ್ಯದ ಆಯುಧಗಳು, ಆನೆಗಳು, ಕುದುರೆಗಳು ಮತ್ತು ಹಿಂದೂ ದೇವಿ ದೇವತೆಯೊಂದಿಗೆ ಅವಳ ಯೋಧ ರೂಪದಲ್ಲಿ , ವಿಷ್ಣು ಅವತಾರ ರಾಮನನ್ನು ಪೂಜಿಸುವುದು ಮತ್ತು ಪ್ರದರ್ಶಿಸಿ, ಸಮಾರಂಭಗಳು ಮತ್ತು ಪ್ರಮುಖ ಮೆರವಣಿಗೆಯನ್ನು ತೆಗೆದು ಈ ಹಬ್ಬವನ್ನು ಆಚರಿಸುತ್ತಾರೆ.ಈ ಹಬ್ಬದ ಸಮಯದಲ್ಲಿ ಅನೇಕರು ತಮ್ಮ ದೂರದ ಸಂಬಂಧಿಕರನ್ನು ಭೇಟಿಯಾಗುತ್ತಾರೆ. ಊರಿನ ಎಲ್ಲ ದೇವಾಲಯಗಳು , ರಸ್ತೆಗಳು, ಕಟ್ಟಡಗಳು, ಮನೆಗಳನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿರುತ್ತಾರೆ.ಎಲ್ಲಾ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳಿಗೆ ಕೆಲವು ದಿನಗಳವರೆಗೆ ರಜೇವಿರುತ್ತದೆ. ಒಂದು ವಾರದವರೆಗೆ ಎಲ್ಲರೂ ಹಬ್ಬದ ಉತ್ಸಾಹದಲ್ಲಿ ಇರುತ್ತಾರೆ. ಅವರು ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಈ ಹಬ್ಬವನ್ನು ಆನಂದಿಸುತ್ತಾರೆ.





ಮೈಸೂರಿನ 'ವಿಜಯದಶಮಿ' ದಸರಾ ಉತ್ಸವ



ಮೈಸೂರಿನ ದಸರಾ ಉತ್ಸವವು ಪೂರ್ತಿ ಜಗತ್ತಿನಲ್ಲಿ ಪ್ರಸಿದ್ಧವಾಗಿದೆ. ಈ ಉತ್ಸವವನ್ನು ಆನಂದಿಸಲು ನಮ್ಮ ರಾಜ್ಯ ಅಥವಾ ದೇಶದ ಜನರು ಅಷ್ಟೇ ಅಲ್ಲಾ , ಜಗತ್ತಾದ್ಯಂತ ಅನೇಕ ದೇಶಗಳ ಜನರು ಕೂಡ ಹೆಚ್ಚು ಸಂಖ್ಯೆಯಲ್ಲಿ ಮೈಸೂರಿಗೆ ಭೇಟಿ ನೀಡುತ್ತಾರೆ. ದಸರಾ ಹಬ್ಬವು ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ.ಈ ಹಬ್ಬದ ದಿನಗಳಲ್ಲಿ ಮೈಸೂರಿನ ಅರಮನೆಯ ದೀಪಾಲಂಕಾರ ಬಹು ಆಕರ್ಷಣೀಯವಾಗಿರುತ್ತದೆ.


ವಿಜಯದಶಮಿ ದಿನ ಹನ್ನೆರಡು ಆನೆಗಳ ಗಜಪಡೆವು ವಿವಿಧ ವರ್ಣಗಳಿಂದ ಅಲಂಕರಿಸಿದ ಉಡುಪಿನಿಂದ ಅಲಂಕರಿಸಲ್ಪಡುತ್ತವೆ. ಈ ಗಜಗಳಲ್ಲಿ ಒಂದು ಗಜವು ಸುವರ್ಣ ಅಂಬಾರಿಯಲ್ಲಿ ಚಾಮುಂಡೇಶ್ವರಿ (ದುರ್ಗಾ) ದೇವಿಯ ವಿಗ್ರಹವನ್ನು ಹೊತ್ತು ಅರಮನೆಯ ಬಿದಿಗಳಲ್ಲಿ ರಾಜ ಗಾಂಭೀರ್ಯದಿಂದ ಅದ್ದುರಿಯಾದ ಜಂಬೂ ಸವಾರಿ ಮಾಡುತ್ತಾರೆ.ದುರ್ಗಾ ದೇವಿಯ ಪ್ರತಿಮೆಯ ಮೇಲೆ ಅಪಾರ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಬಳಸುವುದರಿಂದ ಈ ಹಬ್ಬವು ಅದ್ದೂರಿ ಮತ್ತು ಸುವರ್ಣಮಯವೇನಿಸುತ್ತದೆ. 


ದೇಶಾದ್ಯಂತ ದಸರಾ ಹಬ್ಬದ ಆಚರಣೆ


                ಭಾರತದಲ್ಲಿ ದಸರಾ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಬ್ಬಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ.ನಮ್ಮ ಭಾರತ ದೇಶದ ಕೆಲವು ಭಾಗಗಳಲ್ಲಿ ಜನರು ದಸರಾ ಹಬ್ಬವು ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ . ಒಂಬತ್ತು ದಿನಗಳ ಕಾಲ ದುರ್ಗಾ ಮಾತೆಯ ಮೂರ್ತಿಗಳನ್ನು ಪೂಜಿಸಿ,ಈ ಹತ್ತು ದಿನದ ಕಾಲನಂತರ ದುರ್ಗಾ ದೇವಿಯೂ ಸ್ವರ್ಗಕ್ಕೆ ಹೋಗುತ್ತಾಳೆ ಎಂಬ ವಿಶ್ವಾಸದಿಂದ ಆ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ.ಮತ್ತೆ ಮುಂದಿನ ವರ್ಷ ಅವಳನ್ನು ಸ್ವಾಗತಿಸಲು ತಮ್ಮ ಮನೆಗಳು , ದೇವಾಲಯಗಳನ್ನು ಸ್ವಚ್ಚಗೊಳಿಸಿ ಪವಿತ್ರವಾದ ಅರ್ಪಣೆಗಳನ್ನು ಮಾಡುತ್ತಾರೆ ಎಂದು ನಂಬಲಾಗಿದೆ. ಈ ಹಬ್ಬದ ದಿನಗಳಲ್ಲಿ ತಮ್ಮ ಮನೆಗಳಲ್ಲಿ ಸಿಹಿತಿಂಡಿಗಳನ್ನು ತಯಾರಿಸಿ ತಮ್ಮ ಸ್ನೇಹಿತರು ಸಂಬಧಿಕರಿಗೆ ಹಂಚುತ್ತಾರೆ.


ದೇವಾಲಯಗಳು,ಮನೆಗಳು,ರಸ್ತೆಗಳನ್ನು ದೀಪದಿಂದ ಅಲಂಕರಿಸಿ ವಿವಿಧ ಧಾರ್ಮಿಕ ಹಾಗೂ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ರಾಮ,ಸೀತೆ ಹಾಗೂ ಲಕ್ಷ್ಮಣ ಇವರು ವನವಾಸದಿಂದ ಅಯೋಧ್ಯೆಗೆ ಬರುವ ಕಾಲದ ವಿವಿಧ ನಾಟಕದ ಅಂಕಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಏಕೆಂದರೆ ಈ ದಿನವೇ ಭಗವಾನ್ ರಾಮನು ರಾವಣನನ್ನು ಸಂಹಾರ ಮಾಡಿದನೆಂದು ಅವರು ನಂಬುತ್ತಾರೆ. ಈ ಹಬ್ಬದ 10 ನೇ ದಿನದಂದು ರಾವಣನ ಪ್ರತಿಮೆಗಳನ್ನು ತಯಾರಿಸಿ ಆ ಪ್ರತಿಮೆಯನ್ನು ಸುಟ್ಟಿ 'ಕೆಟ್ಟದ್ದರ ಮೇಲೆ ಒಳ್ಳೆಯದ ' ಪ್ರತಿಕನಾಗಿ ಈ ಹಬ್ಬವನ್ನು ದೇಶಾದ್ಯಂತ ಆಚಿಸಲಾಗುವುದು.

          ಈ ಹಬ್ಬವು ಕಲೆ, ಸಂಗೀತ, ನೃತ್ಯ ಮತ್ತು ನಾಟಕದ ವಿವಿಧ ಪ್ರಕಾರಗಳ ಮೂಲಕ ಭಾರತದ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ. ಹಬ್ಬವು ಸಮುದಾಯಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಜನರಲ್ಲಿ ಏಕತೆ ಮತ್ತು ಸೌಹಾರ್ದತೆಯ ಭಾವನೆಯನ್ನು ಬೆಳೆಸುತ್ತದೆ.ಈ ದಿನಗಳಲ್ಲಿ ಅನೇಕ ನಗರಗಳು ಮತ್ತು ಪಟ್ಟಣಗಳಲ್ಲಿ ವರ್ಣರಂಜಿತ ಮೆರವಣಿಗೆಗಳು ನಡೆಯುತ್ತವೆ. ಭಕ್ತರು ದಸರಾದಂದು ತಮ್ಮ ಆಶೀರ್ವಾದವನ್ನು ಪಡೆಯಲು ವಿವಿಧ ದೇವ-ದೇವತೆಗಳ ದೇವಾಲಯಗಳಿಗೆ ಭಕ್ತಿಯಿಂದ ಭೇಟಿ ನೀಡಿ ದೀಪಗಳನ್ನು ಪ್ರಜ್ವಲಿಸುವ ಮೂಲಕ ತಮ್ಮ ಜೀವನದಲ್ಲಿರುವ ಕತ್ತಲೆ ದೂರಾಗಿ ಅವು ಬೆಳಕಿನಿಂದ ಹೊಳೆಯಲ್ಲಿ ಎಂದು ಬೇಡಿಕೊಳ್ಳುತ್ತಾರೆ.


                ಬನ್ನಿ ಎಲ್ಲರೂ ಕೂಡಿ,

     ಅತಿ ಪ್ರಾಚೀನ , ಶ್ರೀಮಂತ ಚರಿತ್ರೆ ಹೊಂದಿರುವ 

       ಮತ್ತು ಪವಿತ್ರವಾಗಿರುವ ಈ ದಸರಾ ಹಬ್ಬವನ್ನು

            ಅತಿ ವಿಭೃಜನೆಯಿಂದ ಆಚರಿಸೋಣ.

🙏🙏🙏🙏🙏🙏🙏🙏🙏🙏🙏🙏





Smart a2z learning 










0 Comments