ಕನ್ನಡ ಗಾದೆಗಳು(Gadegalu in Kannada)


✨   
ಗಾದೆಗಳು ✨


1.ಮನಸಿದ್ದರೆ ಮಾರ್ಗ.

2.ಗಾಳಿ ಬಂದಾಗ ತೂರಿಕೋ.

3.ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.

4.ಹಿತ್ತಲಗಿಡ ಮದ್ದಲ್ಲ.

5.ದೂರದ ಬೆಟ್ಟ, ಕಣ್ಣಿಗೆ ನುಣ್ಣಗೆ.

6.ಆರೋಗ್ಯವೇ ಭಾಗ್ಯ.

7.ತಾಳಿದವನು ಬಾಳಿಯಾನು.

8.ಹಾಸಿಗೆ ಇದ್ದಷ್ಟು ಕಾಲು ಚಾಚು. 

9.ಗಾಳಿಯಲ್ಲಿ ಗೋಪುರ ಕಟ್ಟಿದಂತೆ. 

10.ಅಲ್ಪ ವಿದ್ಯಾ ಮಹಾ ಗರ್ವಿ.

11.ಒಗ್ಗಟ್ಟಿನಲ್ಲಿ ಬಲವಿದೆ.

12.ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ. 

13.ನಾಳೆ ಅಂದವನ ಮನೆಹಾಳು. 

14.ಬಡವರ ಸಿಟ್ಟು ದವಡೆಗೆ ಮೂಲ. 

15.ಅಹಂಕಾರಕ್ಕೆ ಉದಾಸೀನವೇ ಮದ್ದು. 

16.ಪಾಲಿಗೆ ಬಂದದ್ದು ಪಂಚಾಮೃತ. 

17.ಕುಳಿತು ಉನ್ನವನಿಗೆ ಕುಡಿಕೆ ಹೊನ್ನು

     ಸಾಲದು. 

18.ಮಾತು ಆಡಿದರೆ ಹೋಯಿತು, ಮುತ್ತು 

     ಒಡೆದರೆ ಹೋಯಿತು. 

19.ಸಂಕಟ ಬಂದಾಗ ವೆಂಕಟರಮಣ. 

20.ಇಬ್ಬರ ಜಗಳ ಮೂರನೆಯವನಿಗೆ

     ಲಾಭ. 

21.ಹೂವಿನಿಂದ ನಾರು ಸ್ವರ್ಗಕ್ಕೆ.

22.ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ. 

23.ಕೈಕೆಸರಾದರೆ ಬಾಯಿ ಮೊಸರು.

24.ನಯಶಾಲಿಯಾದವ ಜಯಶಾಲಿ

    ಆದಾನು.

25.ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ.

26.ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ

     ಫಲವಿಲ್ಲ. 

27.ಹೊಳೆ ದಾಟಿದ ಮೇಲೆ ಅಂಬಿಗ

     ಯಾರೋ.

28. ಇರುಳು  ಕಂಡ ಬಾವಿಗೆ ಹಗಲು                  ಬಿದ್ದಂತೆ.

29.ಅರಸನ ಚಿತ್ತ ಮರದ ನೆರಳು. 

30.ಅತಿ ಆಸೆ ಗತಿ ಕೆಡಿಸಿತು. 

31.ಅಂಗಳ ಹಾರಿ, ಗಗನ ಹಾರು.

32.ಅರಸನ ಮಾನ ಅರಸನಿಗೆ,           

     ಅಗಸನ ಮಾನ ಅಗಸನಿಗೆ 

33.ಅತ್ತೆಗೊಂದು ಕಾಲ, ಸೊಸೆಗೊಂದು

     ಕಾಲ. 

34.ಆದರೆ ಆದಿತ್ಯವಾರ ಹೋದರೆ

     ಸೋಮವಾರ. 

35.ಇಂದಿನ ಸೋಲು ನಾಳಿನ ಗೆಲುವು. 

36.ಊಟ ಬಲ್ಲವನಿಗೆ ರೋಗವಿಲ್ಲ. 

     ಮಾತು ಬಲ್ಲವನಿಗೆ ಜಗಳವಿಲ್ಲ. 

37.ಅವಶ್ಯಕತೆ ಸಂಶೋಧನೆ ಗುಟ್ಟು.

38.ಉಂಡೆ ಮನೆಗೆ ಎರಡು

     ಬಗೆಯುವರು. 

39.ಉದ್ಯೋಗಂ ಪುರುಷ ಲಕ್ಷಣಂ. 

40.ಹಾಗಲ ಕಾಯಿಗೆ ಜೀವನ ಕಾಯಿ ಸಾಕ್ಷಿ.

41.ಹೆತ್ತ ಹೋದರು ಮೃತ್ಯು ಬಿಡದು. 

42.ಒಬ್ಬನ ಅಮೃತ ಇನ್ನೊಬ್ಬನಿಗೆ ವಿಷ. 

43.ಕಳ್ಳನ ಹೆಜ್ಜೆ ಕಳ್ಳನೆ ಬಲ್ಲ. 

44.ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.

45.ಕಿವುಡನ ಮುಂದೆ ಕಿನ್ನರಿ ಬಾರಿಸಿದಂತೆ. 

46.ಕಬ್ಬು ಡೊಂಕಾದರೆ ಸವಿಡೋಂಕೆ? 

47.ಗಿಡಕ್ಕೆ ಕಾಯಿ ಭಾರವೇ? 

48.ಚಿಂತೆ ಮಾಡಿದರೆ ಸಂತೆ ಆದಿತೇ 

49.ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ

     ದೊಣ್ಣೆ ಪೆಟ್ಟು. 

50.ಕಾಮಿನಿಯ ಕಣ್ಣಿಗೆ ಜಗವೆಲ್ಲ ಹಳದಿ. 

51.ದೀಪದ ಬುಡದಲ್ಲಿ ಯಾವಾಗಲೂ

     ಕತ್ತಲೆಯೇ.

52.ದಿಕ್ಕಿಲ್ಲದವನಿಗೆ ದೇವರ ದಿಕ್ಕು. 

53.ದೇವರಲೀಲೆ ದೇವರೇ ಬಲ್ಲ.

54.ನಾಯಿ ಬೊಗಳಿದ್ದರೆ, ದೇವಲೋಕ

     ಹಾಳಾದೀತೆ?

55.ನಾಳೆ ಎಂಬುವನ ಮನೆಹಾಳು. 

56.ನುಡಿಗಿಂತ ನಡೆಯ ಮೇಲು 

     ನಯಶಾಲಿಯಾದನು. 

57.ಬೆಳಗ್ಗೆ ಇದ್ದದ್ದೆಲ್ಲಾ ಹಾಲಲ್ಲ.

58.ಬಾಯಿ ಇದ್ದವನು ಬರದಲ್ಲೂ

     ಬದುಕಿಯಾನು. 

59.ತಾನು ಸಾಯಬೇಕು ಸ್ವರ್ಗ

     ಪಡೆಯಬೇಕು.


60.ಬಾಯಾರಿದಾಗ ಬಾವಿ ತೋಡಿದ ಹಾಗೆ.

61.ಬುದ್ಧಿಯಿಲ್ಲದವನು ಹದ್ದಿಗಿಂತ ಕಡ

62.ಬಡವನ ಸೊಸೆಗೆ ಎಲ್ಲರೂ ಅತ್ತೆಗಳು.

63.ಬೊಗಳುವ ನಾಯಿ ಕಚ್ಚುವುದಿಲ್ಲ. 

64.ಮಾಡಿದ್ದು ಹುಡುಗಾಟ ಆಗಿದ್ದು

     ದೊಡ್ಡಾಟ.

65.ಮನಸಿನಂತೆ ಮಹಾದೇವ,

     ಮನಸ್ಸಿನಲ್ಲಿ ಮಾರ್ಗವಿದೆ. 

66. ದುಡಿಮೆಯೇ ದುಡ್ಡಿನ ತಾಯಿ.

67. ಮಾತ್ತುಗಕ್ಕೆ ಮೂರೆ ಎಲೆ. 

68. ಮಂಜಿನ ನೀರಿನಿಂದ ನೀರಡಿಕೆ

     ಹೋದತೆ. 

69.ಮೂರ್ತಿ ಚಿಕ್ಕದಾದರೂ ಕೀರ್ತಿ

    ದೊಡ್ಡದು. 

70.ಮೂರು ಕಾಸಿನ ಗಳಿಕೆ ಆರು ಕಾಸಿನ

     ಬಳಕೆ. 

71.ಮೂಗು ಹಿಡಿದರೆ ಬಾಯಿ

     ತೆರೆಯುವುದು. 

72.ಮೊದಲು ಸ್ವಾರ್ಥ ಆಮೇಲೆ

     ಪರಮಾರ್ಥ. 

73. ಮಾತೇ ಮುತ್ತು ,ಮಾತೇ ಮೃತ್ಯು.

74.ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ. 

75.ರಾತ್ರಿ ಕಳೆದರೆ ಹಗಲು, ಕಷ್ಟ ಕಳೆದರೆ

     ಸುಖ. 

76. ಸದಾಚರಣೆಯೆ ಉತ್ತಮ ಉಪದೇಶ.

77.ಹನಿಹನಿ ಕೂಡಿ ಹಳ್ಳ ತೆನೆ ತೆನೆ ಕೂಡಿ

     ರಾಶಿ. 

78.ಹನಿ ಕೂಡಿ ಹಳ್ಳ , ತೆನೆ ಕೂಡಿ ಬತ್ತ. 

79.ಸತ್ಯವಂತನಿಗೆ ಎತ್ತಲೂ ಭಯವಿಲ್ಲ. 

80.ಸಂತೋಷವೇ ನಿಜವಾದ ಸಂಪತ್ತು.


81.ಹೊಸ ಡಾಕ್ಟರಿಗಿಂತ ಹಳೆ ರೋಗಿ ವಾಸಿ.

82.ಬೆಲ್ಲ ಸಿಕ್ಕಿದಾಗ ಪಾಯಸ ಕಾಯಿಸು. 

83.ವೇದ ಸುಳ್ಳಾದರು ಗಾದೆ ಸುಳ್ಳಾಗದು.

84.ಎಮ್ಮೆ ಮೇಲೆ ಮಳೆ ಹೊಯ್ದಂತೆ.

85.ಹಾಡುತ್ತಾ ಹಾಡುತ್ತಾ ರಾಗ , ನೆರಲುತ್ತಾ

     ನೆರಲುತ್ತಾ ರೋಗ.

86.ಮಾತು ಮನೆ ಕೆಡಿಸಿತು, ತೂತು ಒಲೆ

     ಕೆಡಿಸಿತು.

87.ಅಡಿಕೆಗೆ ಹೋದ ಮಾನ ಆನೆ ಕೊಟ್ಟರು

     ಬರಲ್ಲ.

88.ಅರಿವೇ ಗುರು.

89.ತುತ್ತು ಹೆಚ್ಚಾದರೆ ಕುತ್ತು.

90.ನೀರಿನಲ್ಲಿ ಮುಳುಗಿದವನಿಗೆ

    ಚಳಿಯೇನು ಮಳೆಯೇನು.

91.ದಡ್ಡ ಮನುಷ್ಯ ನೆಲಕ್ಕೆ ಭಾರ ಅನ್ನಕ್ಕೆ

     ಖಾರ.

92.ಬರಗಾಲದಲ್ಲಿ ಅಧಿಕ ಮಾಸ.

93.ಕಳ್ಳನ ನಂಬಿದರು ಕುಳ್ಳನ

     ನಂಬಬಾರದು.

94. ತಾನು ಚೆನ್ನಾಗಿದರೆ ಜಗತ್ತೇ ಚೆನ್ನು.

95.ಹಣವಿದ್ದವನು ಊರಿಗೆಲ್ಲ ನೆಂಟ.

96. ಹಾಲಿದ್ದಾಗ ಹಬ್ಬ ಮಾಡು ಹಲ್ಲಿದಾಗ

     ಕಡಲೆ ತಿನ್ನು.

97. ಮಾಡಿದ್ದುಣ್ಣೋ ಮಹಾರಾಯ.

98. ಮೌನಂ ಸಮ್ಮತಿ ಲಕ್ಷಣಂ.

99.ರವಿ ಕಾಣದುದ ಕವಿ ಕಾಣುವನು.

100.ಹಸಿದು ಉಣದಿರಬೇಡ, ಹಸಿಯದೆ

       ಉಣಬೇಡ.

 101. ಮಳೆ ಬಂದ ಹಾಗೆ ಕೊಡೆ ಹಿಡಿ. 







0 Comments