ಭಾರತದ ಸಂವಿಧಾನ ದಿನಾಚರಣೆ
ನವೆಂಬರ್ 26, 2023
ಪ್ರಾಸ್ತಾವಿಕ
ನವೆಂಬರ್ 26 ನಮ್ಮ ರಾಷ್ಟ್ರೀಯ ದಿನಗಳ ಪೈಕಿ ಒಂದು ಮಹತ್ವದ ರಾಷ್ಟ್ರೀಯ ದಿನವಾಗಿದೆ . ಪ್ರತೀ ವರ್ಷ ನವೆಂಬರ್ 26 ಭಾರತದ ಸಂವಿಧಾನ ದಿನವೆಂದು ಆಚರಿಸಲಾಗುತ್ತದೆ. ಈ ದಿನವು ಸ್ವತಂತ್ರ ಭಾರತದ ಇತಿಹಾಸದಲ್ಲಿ ತನ್ನದೇಯಾದ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ 1949 ರಲ್ಲಿ ನವೆಂಬರ್ 26 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು. ಅದು ಜಾರಿಗೆ ಬಂದಿತು 26 ಜನವರಿ 1950 ರಂದು. ಸಂವಿಧಾನವು ಜಾರಿಗೆ ಬಂದನಂತರ ನಮ್ಮ ದೇಶವು ಗಣರಾಜ್ಯವೆಂದು ಗೌರವಿಸಲಾಯಿತು.
ಸಂವಿಧಾನ ರಚನೆಯ ಸಂಕ್ಷಿಪ್ತ ಇತಿಹಾಸ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು 9 ಡಿಸೆಂಬರ್ 1946 ರಂದು, ಸಂವಿಧಾನ ರಚನೆಯ ಉದ್ದೇಶವನ್ನು ಮುಂದೆ ಇಟ್ಟಿಕೊಂಡು ಮೊದಲ ಬಾರಿಗೆ ನವದೆಹಲಿಯಲ್ಲಿ ಸಭೆ ನಡೆಯಿತು. ಸಂವಿಧಾನ ರಚನೆಯ ಉದ್ದೇಶವನ್ನು ಮುಂದೆ ಇಟ್ಟಿಕೊಂಡು ನಡೆಯಲಿರುವ ಈ ಮೊದಲ ಸಭೆಯ ಅಧ್ಯಕ್ಷರು ಡಾ.ಸಚ್ಚಿದಾನಂದ ಸಿನ್ಹಾ ಅವರಾಗಿದ್ದರು. ಈ ಸಭೆಯಲ್ಲಿ ಸಂವಿಧಾನ ಸಮಿತಿಯ ರಚನೆ ಮಾಡಲಾಯಿತು. ಸಂವಿಧಾನ ಸಮಿತಿಯಲ್ಲಿ ಒಟ್ಟು 299 ಜನ ಸದಸ್ಯರಿದ್ದರು. ಈ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು ಡಾ. ರಾಜೇಂದ್ರ ಪ್ರಸಾದ ಅವರು ಆಗಿದ್ದರು.29 ಆಗಸ್ಟ್ 1947 ರಂದು, ಕರಡು ಸಂವಿಧಾನವನ್ನು ತಯಾರಿಸಲು ಕರಡು ಸಮಿತಿಯನ್ನು ರಚಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. 26 ನವೆಂಬರ್ 1949 ರಂದು ಸಮಿತಿಯು ತನ್ನ ಕೆಲಸವನ್ನು ಪೂರ್ಣಗೊಳಿಸಿತು . 24 ಜನವರಿ 1950 ರವರೆಗೆ ಕೊನೆಗೊಂಡಿತು. ಈ ಸಮಯದಲ್ಲಿ ಒಟ್ಟು 11 ಅಧಿವೇಶನಗಳು ನಡೆದವು ಮತ್ತು ಸುಮಾರು 166 ದಿನಗಳವರೆಗೆ ಸಭೆ ನಡೆಯಿತು. 26 ಜನವರಿ 1950 ರಂದು ಭಾರತದ ಸಂವಿಧಾನವು ಜಾರಿಗೆ ಬಂದಿತು.ಈ ದಿನವನ್ನು ನಾವು ನಮ್ಮ ಗಣರಾಜ್ಯೋತ್ಸವನ್ನಾಗಿ ಆಚರಿಸುತ್ತಿವೆ.
ನಮ್ಮ ಭಾರತ ದೇಶದ ಸಂವಿಧಾನ ರಚನೆಯ ಕಾರ್ಯವು 2 ವರ್ಷ 11 ತಿಂಗಳು ಮತ್ತು 18 ದಿನಗಳ ಕಾಲದವರೆಗೆ ನಡೆಯಿತು.ಕೊನೆಗೆ ನವೆಂಬರ್ 26,1949 ಈ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು. ನಮ್ಮ ದೇಶದ ಸಂವಿಧಾನ ರಚಿಸಲು ಶ್ರಮಿಸಿದ ರಚನಕಾರರ ಕೊಡುಗೆಯನ್ನು ನಮ್ಮ ಭಾರತೀಯ ಜನರಿಗೆ ತಿಳಿಸಲು ಮತ್ತು ಸಂವಿಧಾನದಲ್ಲಿರುವ ಪ್ರಮುಖ ಅಂಶಗಳು, ಮೌಲ್ಯಗಳು ,ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನವೆಂಬರ್ 26 ರಂದು 'ಸಂವಿಧಾನ ದಿನ' ಆಚರಿಸಲಾಗುತ್ತದೆ .ಭಾರತದ ಸಂವಿಧಾನ ದಿನವನ್ನು ರಾಷ್ಟ್ರೀಯ ಕಾನೂನು ದಿನ (National Law Day) ಅಥವಾ ರಾಷ್ಟ್ರೀಯ ಸಂವಿಧಾನ ದಿನ ಎಂದೂ ಕರೆಯಲಾಗುತ್ತದೆ..
ನವೆಂಬರ್ 26 ರಂದು ಸಂವಿಧಾನ ದಿನವನ್ನು ಯಾವ ವರ್ಷದಿಂದ ಆಚರಿಸಲಾಗುತ್ತದೆ?
2015 ರಲ್ಲಿ ಸರ್ಕಾರವು ನವೆಂಬರ್ 19 ರಂದು ತಮ್ಮ ಅಧಿಸೂಚನೆಯ ಮೂಲಕ ನವೆಂಬರ್ 26 ಅನ್ನು ಸಂವಿಧಾನ ದಿನವೆಂದು ಘೋಷಿಸಿತು.ಈ ದಿನದಂದು ದೇಶಾದ್ಯಂತ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಂವಿಧಾನದ ಮಹತ್ವವನ್ನು ದೇಶದ ಜನರಿಗೆ ತಿಳಿಸಲಾಗುತ್ತದೆ.ಅದೆರೀತಿ ಶಾಲೆ ಹಾಗೂ ಎಲ್ಲಾ ಕಾರ್ಯಾಲಯಗಳಲ್ಲಿ ಸಂವಿಧಾನದ ಸಾರವನ್ನು ಹೊಂದಿರುವ ಭಾರತದ ಸಂವಿಧಾನ ಪೀಠಿಕೆಯನ್ನು ಓದುತ್ತಾರೆ ಮತ್ತು ಸಂವಿಧಾನದ
ಪ್ರತಿ ಗೌರವವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
ಭಾರತದ ಸಂವಿಧಾನ ಪೀಠಿಕೆ
"ಭಾರತದ ಪ್ರಜೆಗಳಾದ ನಾವು,
ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ
ರೂಪಿಸುವದಕ್ಕಾಗಿ;
ಭಾರತದ ಎಲ್ಲಾ ಪ್ರಜೆಗಳಿಗೆ
ಸಾಮಾಜಿಕ , ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು
ವಿಚಾರ ,ಅಭಿವೃದ್ಧಿ, ನಂಬಿಕೆ, ಧರ್ಮ ಮತ್ತು
ಉಪಾಸನೆಯ ಸ್ವಾತಂತ್ರ್ಯವನ್ನು;
ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು
ದೊರೆಯುವಂತೆ ಮಾಡುವುದಕ್ಕಾಗಿ;
ವ್ಯಕ್ತಿಗೌರವ ,ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ
ದೃಢ ಸಂಕಲ್ಪ ಮಾಡಿ ,
ನಮ್ಮ ಸಂವಿಧಾನ ಸಭೆಯಲ್ಲಿ
1949ನೆಯ ಇಸವಿಯ ನವೆಂಬರ್ ತಿಂಗಳ 26 ನೇ ದಿನದಂದು
ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು,
ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ.
0 Comments