ಸಂತ ಕನಕದಾಸರು
ಕನಕದಾಸರು ದಾಸ ಸಾಹಿತ್ಯದ ಮೂಲಕ ಜೀವನಪಾಠ ಸಾರಿದವರು. ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತರು ಕನಕದಾಸರು. ದಾಸ ಪರಂಪರೆಯಲ್ಲಿರುವ 150 ಕ್ಕಿಂತ ಹೆಚ್ಚು ದಾಸರಲ್ಲಿ ಕನಕದಾಸರು ಒಬ್ಬರು ಶ್ರೇಷ್ಠ ಸಂತರಾಗಿದ್ದರು.
ಜನನ
ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ 1508 ರಲ್ಲಿ (ಈ ಇಸವಿಯು ನಿಶ್ಚಿತವಿಲ್ಲ,ಬೇರೆ ಬೇರೆ ಉಲ್ಲೇಖ ಹಾಗೂ ಗ್ರಂಥನಲ್ಲಿರುವ ಉಲ್ಲೇಖದನ್ವಯ ಕನಕದಾಸರ ಹುಟ್ಟಿದ ಇಸವಿಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ) ಜನಿಸಿದರು. ಇವರ ತಂದೆಯ ಹೆಸರು ಬಿರಪ್ಪನಯಕ ಮತ್ತು ತಾಯಿ ಬಚ್ಚಮ್ಮ. ತಿಮ್ಮಪ್ಪನ ತಂದೆ ತಾಯಿಯವರಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹಳ ನಂಬಿಕೆಯಿತ್ತು. ಅದಕ್ಕೆ ಅವರು ಶ್ರೀ ವೈಷ್ಣವ ಮತಕೆ ಶರಣು ಹೋಗಿದ್ದರು ಅಂದಿನಿಂದ ಇವರು ಸಹ ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು. ಬಿರಪ್ಪನಾಯಕ್ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು, ಅದೇನೆಂದರೆ ತಮಗೆ ಒಬ್ಬ ಕುಲದೀಪಕ ಮಗ ಜನಿಸಬೇಕು ಎಂದು ದಂಪತಿಗಳು ಅವರಲ್ಲಿ ಆಸೆಪಡೆದರು. ಅವರ ನಂಬಿಕೆ ಫಲವಾಗಿ ಬಿರಪ್ಪನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ತಿಳಿದುಕೊಂಡು ಅವರು ತಮ್ಮ ಮಗುವಿಗೆ ತಿಮ್ಮಪ್ಪ ಎಂದು ನಾಮಕರಣ ಮಾಡಿದರು.
ವಿದ್ಯಾಭ್ಯಾಸ
ತಿಮ್ಮಪ್ಪ ನಾಯಕರು ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದ್ದರು. ಅವರು ಬಾಲ್ಯದಲ್ಲಿಯೇ ಅನೇಕ ಗುಣಗಳಿಂದ ಪ್ರವೀಣರಾಗಿದ್ದರು. ಬಾಲ್ಯದಲ್ಲಿಯೇ ಅವರು "ತರ್ಕ", "ವ್ಯಾಕರಣ" ಮತ್ತು "ಮೀಮಾಂಸ"ಗಳಲ್ಲಿ ಪರಿಣತರಾದರು. ಬಂಕಾಪುರದ ಶ್ರೀನಿವಾಸಚಾರ್ಯರ ಬಳಿ ವಿದ್ಯಾಭ್ಯಾಸ ಮಾಡಿ ವ್ಯಾಕರಣ ಸಾಹಿತ್ಯಗಳಲ್ಲಿ ಪಾರಂಗತನಾದರು. ಜ್ಯೋತೆಗೆ ಕುದುರಿಸವಾರಿ ಹಾಗೂ ಯುದ್ಧ ಕಲೆಯನ್ನು ಕಲಿತುಕೊಂಡರು. ಕೆಲವು ವರ್ಷಗಳನಂತರ ಬಿರಪ್ಪ ನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಂಣ್ಣಾಯಕರಾದನು.ಡಣ್ಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು. ಬೀರಪ್ಪ ನಾಯಕನ ಹೆೆಂಡತಿ ಬಚ್ಚಮ್ಮ.
ಈ ಪ್ರಾಂತದ ಡಣ್ಣಾಯಕದ ಪಟ್ಟದ ಅಧಿಕಾರಗಳನ್ನು ನೋಡಿಕೊಳ್ಳುತ್ತ ಪ್ರಜೆಗಳ ಹಿತಗಳನ್ನು ಕಾಪಾಡುತ್ತಿದ್ದರು.ಅದಕ್ಕೆ ಬಹಳ ಬೇಗ ಅವರು ಜನರ ಪ್ರೀತಿಗೆ ಪಾತ್ರರಾದರು .ಒಂದು ಯುದ್ಧದಲ್ಲಿ ಸೋತು ಗಾಯಗೊಂಡಾಗ ಶ್ರೀ ಕೃಷ್ಣ ದೇವರು ಅವರ ಮುಂದೆ ಪ್ರತ್ಯಕ್ಷನಾಗಿ ಅವರಿಗೆ ಜ್ಞಾನೋದಯವಾಯಿತು.
ಸಾಹಿತ್ಯ ರಚನೆ
ಈ ಘಟನೆಯ ನಂತರ, ಕನಕನು ಕ್ಷತ್ರಿಯ (ಯೋಧ) ವೃತ್ತಿಯನ್ನು ತ್ಯಜಿಸಿದನು ಮತ್ತು ಸಂಗೀತ ರಚನೆ , ಸಾಹಿತ್ಯವನ್ನು ಬರೆಯಲು ಮತ್ತು ಶ್ರೀ ಹರಿಯನ್ನು ಕುರಿತು ಜನರಿಗೆ ತತ್ವಶಾಸ್ತ್ರವನ್ನು ವಿವರಿಸಲು ತನ್ನನ್ನು ತೊಡಗಿಸಿಕೊಂಡರು. ತಮ್ಮಗುರು ಶ್ರೀ ವ್ಯಾಸರಾಯ ಅವರಿಂದ ಕನಕದಾಸ ಎಂಬ ಬಿರುದು ಪಡೆದುಕೊಂಡರು. ಅವರ ಆರಂಭಿಕ ಆಧ್ಯಾತ್ಮಿಕ ಕೃತಿಗಳು "ನರಸಿಂಹ ಸ್ತೋತ್ರ", "ರಾಮಧ್ಯಾನ ಮಂತ್ರ", ಮತ್ತು "ಮೋಹನತರಂಗಿಣಿ" ಮುಂತಾದ ಕಾವ್ಯಗಳನ್ನು ಒಳಗೊಂಡಿವೆ. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಕಾಗಿನೆಲೆಯ ಆದಿಕೇಶವ ಎಂಬ ಅಂಕಿತ ನಾಮಗಳಿಂದ ಪ್ರಸಿದ್ಧವಾದವು.
ಕನಕನ ಕಿಂಡಿ
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರಾಗಿದ್ದರು.
ಕನಕದಾಸರು ವ್ಯಾಸತೀರ್ಥರ ಶಿಷ್ಯರಾಗಿದ್ದರಿಂದ ಉಡುಪಿಯೊಂದಿಗೆ ಸಂಪರ್ಕ ಹೊಂದಿದ್ದರು .ಆ ಕಾಲಿನಲ್ಲಿ ವ್ಯಾಸ ತೀರ್ಥರ ಬಾಂಧವ್ಯದಲ್ಲಿ ಗೌರವದ ಮೇರೆಗೆ ಕನಕದಾಸರನ್ನು ಉಡುಪಿಗೆ ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ವ್ಯಾಸತೀರ್ಥರು ಕನಕದಾಸರನ್ನು ದೇವಾಲಯದೊಳಗೆ ಬಿಡುವಂತೆ ಕೇಳಿಕೊಂಡರೂ ಆದರೆ ಅಲ್ಲಿರುವ ಧರ್ಮ ಕರ್ಮಠರು ಕನಕದಾಸರನ್ನು ಅವರ ಬಟ್ಟೆಗಳ ಆಧಾರದ ಮೇಲೆ ಕೆಳಜಾತಿಯ ಸದಸ್ಯ ಎಂದು ನಿರ್ಣಯಿಸಿ ಮಠಕ್ಕೆ ಪ್ರವೇಶಿಸಲು ಬಿಡಲಿಲ್ಲ .
ಅವರು ಯಾವುದೇ ಕಾರಣಕ್ಕೂ ದೇವಾಲಯದ ಒಳಗೆ ಬಿಡಬಾರದು ಎಂದು ನಿರ್ಧರಿಸಿದ್ದರು. ಹೀಗಾಗಿ ಕನಕದಾಸರು ದೇವಾಲಯದ ಪ್ರಾರಂಭದಲ್ಲಿ ನಿಂತು ದೇವರನ್ನು ಪ್ರಾರ್ಥಿಸಿ ಬೇಕಾಗಿತ್ತು. ಸುಮಾರು ನಾಲ್ಕು ವಾರಗಳು ಉರಳಿದು ಕನಕದಾಸರನ್ನ ಮಾತ್ರ ಕೃಷ್ಣನ ದರ್ಶನಕ್ಕೆ ಒಳಗೆ ಬರೋದಕ್ಕೆ ದೇವಾಲಯದ ಆಡಳಿತ ಬಿಡಲಿಲ್ಲ ಕನಕದಾಸರು ಕೂಡ ಕೃಷ್ಣನ ನೋಡಿದೆ ನಾನು ಇಲ್ಲಿಂದ ಹೋಗುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದರು. ಕೊನೆಗೊಂದಿನ ಪಶ್ಚಿಮ ಅಭಿಮುಖವಾಗಿ ಹುಟ್ಟಿದ ಕನಕರಿಗೆ ಅಲ್ಲೇ ದೇವರು ತಿರುಗಿ ದರ್ಶನ್ ಕೊಟ್ಟ ಅಂತ ಹೇಳಲಾಗುತ್ತದೆ. ಇದೇ ಕಿಂಡಿ ಮುಂದೆ ಕನಕನ ಕಿಂಡಿ ಎಂಬ ಹೆಸರಿನಿಂದ ಪ್ರಸಿದ್ದವಾಯಿತು.
ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಮೋಹನ ತರಂಗಿಣಿ. ನಳ ಚರಿತ್ರೆ ಎನ್ನುವ ಎರಡು ಮಹಾನುಕುತ್ತಿಗಳನ್ನು ರಚಿಸುತ್ತಾರೆ. ಹರಿಭಕ್ತಿಸಾರ ಹಾಗೂ ರಾಮಧ್ಯಾನ ಚರಿತ್ರೆಗಳು ಕೂಡ ಅವರ ಸಮಾಜದ ಬಗೆಗಿನ ನಿಲುವಿಗೆ ಸಾಕ್ಷಿ ಅನಿಸಿಕೊಳ್ಳುತ್ತೇವೆ. ಆರೋಗ್ಯಪೂರ್ಣ ಸಮಾಜದ ಕನಸು ಕಂಡಿದ್ದ ಸಂತದಾಸರು ಕ್ರಿಸ್ತಶಕ 1609ರಲ್ಲಿ ಅಧಿಕಶವನ್ನು ಸೇರಿಕೊಳ್ಳುತ್ತಾರೆ. ಇವತ್ತಿಗೂ ಕೂಡ ಕನಕ ಹಾಡು ಸಂಗೀತ ಕೀರ್ತನೆಗಳು ಜನರ ಬಾಯಲ್ಲಿ ನಲಿದಾಡುವ ಮೂಲಕ ಅವರನ್ನು ಇನ್ನು ನಮ್ಮ ನಡುವೆ ಜೀವಂತವಾಗಿಸಿವೆ.
0 Comments